ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾರ್ಷಿಕೋತ್ಸವವು 25/08/2022 ನೇ ಗುರುವಾರದಂದು ನಡೆಯಿತು. ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಆಶೀರ್ವಾಚಿಸಿದರು . ಮುಖ್ಯ ಅತಿಥಿಗಳಾದ ಎಂ. ಜಿ. ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಲಕ್ಷೀನಾರಾಯಣ ಕಾರಂತ್ ಅವರು ವಿದ್ಯಾರ್ಥಿಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ರೂಢಿಸಿಕೊಂಡು, ಕ್ರಿಯಾಶೀಲರಾಗಿ ನವಭಾರತ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ನೀಡಬೇಕೆಂದು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಕಾಲೇಜಿನ ಶ್ರೀ ಸುರೇಶ್ ಬಾಬು ಅವರನ್ನು ಅಭಿನಂದಿಸಲಾಯಿತು. ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಸಿ.ಎ ಪ್ರಶಾಂತ್ ಹೊಳ್ಳ ಟಿ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಹೀಶ್ ವಾಗ್ಲೇ ವಂದಿಸಿದರು. ಪ್ರಾಂಶುಪಾಲರಾದ ಡಾ | ಸುಕನ್ಯಾ ಮೇರಿ ಜೆ ಕಾಲೇಜಿನ ಸಮಗ್ರ ವರದಿಯನ್ನು ವಾಚಿಸಿದರು . ವಿನಯ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ | ರಾಮಕೃಷ್ಣ ಉಡುಪ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಸುದರ್ಶನ್, ಕಾರ್ಯದರ್ಶಿಯಾದ ಸುಚೇತಾ, ಎಂ. ಕಾಂ ಪ್ರತಿನಿಧಿ ತೃಪ್ತಿ ಉಪಸ್ಥಿತರಿದ್ದರು.
Blog
ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ – ವಾರ್ಷಿಕೋತ್ಸವ
Share on facebook
Share on linkedin
Share on whatsapp
Explore
ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ
March 28, 2024
3rd Phase of Nivedana
March 21, 2024
Nivedana- A Community Connect Initiative
March 19, 2024
Related Articles
ವಿಶ್ವ ಗುಬ್ಬಚ್ಚಿ ದಿನಾಚರಣೆ – ಪಕ್ಷಿಗಳಿಗೆ ಜೀವಜಲ
March 28, 2024
3rd Phase of Nivedana
March 21, 2024
Nivedana- A Community Connect Initiative
March 19, 2024
Subscribe to Newsletter
Contact Us
Sri Poornaprajna Evening College
Udupi, Karnataka- 576101
Phone: 0820 252 0743
Email : sppecudupi@gmail.com
Important Links
- Academic
- News and Events
- Staff
- List Item